ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ಶುದ್ಧ ಕುಡಿಯುವ ನೀರು ಘಟಕ ಹಾಗು ನ್ಯಾಯಾಧೀಶರ ವಸತಿ ಗೃಹವನ್ನು ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ನ್ಯಾಯಾಧೀಶರಿಗೆ ಸಹಕರಿಸುವಂತೆ ತಿಳಿಸಿದರು. ಹಿರಿಯ ವಕೀಲರು ತಮ್ಮ ಕೆಲಸ ಮುಗಿದ ನಂತರ ವಕೀಲರ ಸಂಘದಲ್ಲಿ ಕನಿಷ್ಠ ೨ ತಾಸು ಸಮಯ ಕಳೆದು ಕಿರಿಯ ವಕೀಲರಿಗೆ ತಮ್ಮ ಅನುಭವ ಹಾಗೂ ಸಲಹೆ ನೀಡುವ ಮೂಲಕ ಕಿರಿಯರು ಉತ್ತಮ ವಕೀಲರಾಗಲು ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಟ್ಟರು.
ಈ ಸಂದರ್ಭ ಶಾಸಕ ಕೆ.ಮಹದೇವ್, ನ್ಯಾಯಾಧೀಶರಾದ ಅರ್ಜುನ್ ಎಸ್ ಮಳ್ಳೂರು, ಜೆ.ಜಯಶಂಕರ್, ವಕೀಲರ ಸಂಘದ ಅಧ್ಯಕ್ಷ ಟಿ.ಎನ್.ಮಹೇಶ್, ಕಾರ್ಯದರ್ಶಿ ಎಂ.ಜೆ.ಸ್ವಾಮಿ, ಖಜಾಂಚಿ ಪ್ರಸನ್ನ, ಉಪಾಧ್ಯಕ್ಷ ಎನ್.ಕರುಣಾಕರ್, ಹಿರಿಯ ವಕೀಲರಾದ ಗೋವಿಂದಗೌಡ, ಬಿ.ವಿ.ಜವರೇಗೌಡ ಸೇರಿದಂತೆ ವಕೀಲರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top