ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಒಗ್ಗಟ್ಟಿನಿಂದ ಪಕ್ಷ ಭೇದ ಮಾಡದೆ ನೌಕರರ ಸಮಸ್ಯೆ ಬಗೆಹರಿಸಲು ಶ್ರಮಿಸುವಂತೆ ಶಾಸಕ ಕೆ.ಮಹದೇವ್ ಕಿವಿಮಾತು ಹೇಳಿದರು.

ಪಟ್ಟಣದ ರಾಜ್ಯ ರ‍್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಕರ‍್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳು ತಮ್ಮ ಇಲಾಖೆಯಲ್ಲಿನ ಸಮಸ್ಯೆಗಳ ಪರಿಹಾರ ಹಾಗೂ ಸಂಘದ ಅಭಿವೃದ್ಧಿಗಾಗಿ ನನಗೆ ಮನವಿ ಸಲ್ಲಿಸಿದರೆ ಪ್ರಾಮಾಣಿಕವಾಗಿ ಬಗೆಹರಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಉತ್ತಮವಾಗಿ ಕೆಲಸ ನರ‍್ವಹಿಸುವಂತೆ ಶುಭ ಕೋರಿದರು.
ತಾಲೂಕು ರಾಜ್ಯ ರ‍್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಿಡಿಒ ಶಿವಯೋಗ ಮಾತನಾಡಿ ಸಂಘದ ನರ‍್ದೇಶಕರುಗಳು ನನ್ನ ಮೇಲಿಟ್ಟಿರುವ ನಂಬಿಕೆಗೆ ಹಾಗೂ ಅಧ್ಯಕ್ಷ ಸ್ಥಾನದ ರ‍್ತವ್ಯಕ್ಕೆ ಚ್ಯುತಿ ಬರದ ಹಾಗೆ ಕೆಲಸ ನರ‍್ವಹಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಶಾಸಕ ಕೆ.ಮಹದೇವ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು, ನೂತನವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಶಿವಯೋಗ ಮತ್ತು ಖಜಾಂಚಿ ಸ್ಥಾನಕ್ಕೆ ಆಯ್ಕೆಯಾದ ಆರೋಗ್ಯ ಇಲಾಖೆಯ ಅಣ್ಣೇಗೌಡ ಅವರನ್ನು ಅಭಿನಂದಿಸಲಾಯಿತು.
ಈ ಸಂರ‍್ಭ ಪುರಸಭಾ ಸದಸ್ಯರುಗಳಾದ ನಿರಂಜನ್, ಪಿ.ಸಿ ಕೃಷ್ಣ, ವಿನೋದ್, ಪ್ರಕಾಶ್ ಸಿಂಗ್, ಎಚ್.ಕೆ ಮಂಜುನಾಥ್, ನಿಕಟಪರ‍್ವ ಅಧ್ಯಕ್ಷ ಈ.ಬಿ ವೆಂಕಟೇಶ್, ಕರ‍್ಯರ‍್ಶಿ ಪರಮಶಿವಯ್ಯ, ನರ‍್ದೇಶಕರುಗಳಾದ ಮೋಹನ್ ಕುಮಾರ್, ನಾಗಣ್ಣೆಗೌಡ, ಎಚ್.ಡಿ ಮಂಜುನಾಥ್, ಉಷಾ, ಆರ್.ಟಿ ಚಂದ್ರು, ಈರಾಜ್, ಹೇಮಂತ್ ಕುಮಾರ್, ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top