ಬುಡಕಟ್ಟು ಜನಾಂಗದವರು ಲಸಿಕೆ ಹಾಕಿಸಿಕೊಳ್ಳ ಬೇಕಿದೆ ಎಂದು MLA K.Mahadev ಬುಡಕಟ್ಟು ಜನಾಂಗದ ಮುಖಂಡರಿಗೆ ಅರಿವು ಮೂಡಿಸಿದರು 26/06/2021

mla k mahadev

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಕೆ.ಮಹದೇವ್ ರವರ ಅದ್ಯಕ್ಷತೆಯಲ್ಲಿ ಬುಡಕಟ್ಟು ಜನಾಂಗದವರ ಜೊತೆ ಸಭೆ ನಡೆಸಲಾಯಿತು ಈ ಸಂದರ್ಭ ಮಾತನಾಡಿದ ಶಾಸಕರು ಸೋಂಕಿನ ಲಕ್ಷಣ ಉಳ್ಳವರನ್ನು ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದಡಿ ತಮ್ಮ ಗ್ರಾಮಗಳಿಗೆ ಆಗಮಿಸಿದಾಗ ಕಡ್ಡಾಯ ತಪಾಸಣೆಗೊಳಪಡಿಸುವಂತೆ ಕೋರಿದರು . ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದೆ ಪ್ರತಿಯೊಬ್ಬರು ಜಾಗೃತರಾಗಿರುವಂತೆ ತಿಳಿಸಿದರು. ಬುಡಕಟ್ಟು ಜನಾಂಗದವರು ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ, ನಮ್ಮ ತಾಲ್ಲೂಕಿನಲ್ಲಿ ಬುಡಕಟ್ಟು ಜನಾಂಗಗಳ 7000ದಷ್ಟು ಜನಸಂಖ್ಯೆ ಇದ್ದರು ಕೇವಲ 400 ಮಂದಿ ಲಸಿಕೆ ಪಡೆದಿರುವುದು ವಿಪರ್ಯಾಸವಾಗಿದೆ ಹೀಗಾಗಿ ಎಲ್ಲ ಮುಖಂಡರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಲಸಿಕೆ ಹಾಕಿಸಬೇಕೆಂದು ಅರಿವು ಮೂಡಿಸಿದರು

ಈ ಸಂದರ್ಭ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಬುಡಕಟ್ಟು ಜನಾಂಗದ ಮುಖಂಡರುಗಳು ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top