ಪಿರಿಯಾಪಟ್ಟಣದಲ್ಲಿ ಶಾಸಕ ಕೆ ಮಹದೇವ್ ರವರು ಮಸಣಿಕಮ್ಮ ದೇವಸ್ಥಾನದ ಬಳಿ ಹಾಗೂ ಮೇದರ್ ಬ್ಲಾಕ್ ನಲ್ಲಿ ಆಹಾರ ಕಿಟ್ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಶಾಸಕ ಕೆ ಮಹದೇವ್ ರವರು ಯಾರು ತಾಲ್ಲೂಕಿನಲ್ಲಿ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವವರನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ನೀಡುವುದು ಜನಪ್ರತಿನಿಧಿಯ ಕರ್ತವ್ಯವಾಗಿರುವುದರಿಂದ ಆ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ,ಪ್ರತಿನಿತ್ಯ ಸಾರ್ವಜನಿಕರಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಿಲ್ಲ ಸಮಯ ಬಂದಾಗ ಅದರ ಉಪಯೋಗವನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು . 23ವಾರ್ಡ್ ಗಳಲ್ಲಿರುವ ಸದಸ್ಯರು ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅವರ ಜೀವನಕ್ಕೆ ಸಾಕಷ್ಟು ಸಹಕಾರ ನೀಡುವುದರ ಜತೆಗೆ ಅವರಿಗೆ ಜೀವನದಲ್ಲಿ ಉತ್ತೇಜನ ಕೊಡುವ ಮಾರ್ಗವನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದರು .
ಪುರಸಭೆಯ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ ಕರ್ನಾಟಕದಾದ್ಯಂತ ಎಲ್ಲೆಡೆಯೂ ಆಹಾರ ಕಿಟ್ ವಿತರಣೆ ನಿಂತಿದೆ, ತಾಲೂಕಿನಲ್ಲಿ ಹೆಚ್ಚು ಅಸಂಘಟಿತ ಕಾರ್ಮಿಕರು ಇರುವ ಕಾರಣ ಪಿರಿಯಾಪಟ್ಟಣ ಶಾಸಕ ಕೆ ಮಹದೇವ್ ರವರು ಸರ್ಕಾರದ ಜತೆ ಮಾತುಕತೆಯಾಡಿ ಶೇಕಡಾ ಎಂಭತ್ತರಷ್ಟು ಅಸಂಘಟಿತ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡಲು ಸಹಕರಿಸಿದ್ದಾರೆ ಅವರಿಗೆ ಪಿರಿಯಾಪಟ್ಟಣ ತಾಲ್ಲೂಕಿನ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಪುರಸಭಾ ಸದಸ್ಯರಾದ ಪ್ರಕಾಶ್ ಸಿಂಗ್, ರೋಹಿಲ್ಲ ಖಾನಂ, ಮಾಜಿ ಅಧ್ಯಕ್ಷ ತಿಮ್ಮ ನಾಯಕ, ಜೆಡಿಎಸ್ ಮುಖಂಡರಾದ ಇಲಿಯಾಜ್, ಮುಶೀರ್ ಖಾನ್, ಕಿರಿಯ ಅರೋಗ್ಯ ನಿರಕ್ಷಕ ಪ್ರದೀಪ್ ಹಾಗು ಮತ್ತಿತರರು ಹಾಜರಿದ್ದರು