ನಾನು ಎಂಬ ಅಹಂನಿಂದ ಕೆಲಸ ಮಾಡಿಲ್ಲ ಶಾಸಕ ಕೆ ಮಹದೇವ್

ನಾನು ಶಾಸಕನಾಗಿ ಆಯ್ಕೆಯಾದಾಗಿನಿಂದ ನಮ್ಮ ಜನರಿಗಾಗಿ ಕೆಲಸ ಮಾಡಿದ್ದೇನೆ ಎಂಬ ಭಾವನೆ ಇಟ್ಟುಕೊಂಡಿದ್ದೇನೆ ಹೊರತು ನಾನು ಎಂಬ ಅಹಂ ನಿಂದ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ಕೆ. ಮಹದೇವ್ ತಿಳಿಸಿದರು.

ಸಮೀಪದ ವಡೇರಹೊಸಳ್ಳಿ ಗ್ರಾಮದಿಂದ ಹಾರನಹಳ್ಳಿ ಗ್ರಾಮದವರೆಗೆ ಸುಮಾರು ₹ 9 ಕೋಟಿ ರೂ ಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಅವರು ದೊಡ್ಡ ಮೊತ್ತದ ಹಣ ಮಂಜೂರು ಮಾಡಿಸಿಕೊಳ್ಳುವುದಕ್ಕೆ 90 ಸಲ ಬಸ್ಕಿ ಹೊಡೆದಿರುತ್ತೇನೆ, ಹಣ ಮಂಜೂರಾತಿ ಮಾಡಿಸಿ ಕೆಲಸ ಪ್ರಾರಂಭವಾದಾಗ ಉತ್ತಮ ಗುಣಮಟ್ಟದ ಕೆಲಸಗಳನ್ನು ಮಾಡಿಸಿಕೊಳ್ಳುವ ಜಾಣ್ಮೆ ಗ್ರಾಮಸ್ಥರು ಮತ್ತು ಅಧಿಕಾರಿಗಳ ಮೇಲಿರುತ್ತದೆ. ಹತ್ತಾರು ವರ್ಷಗಳ ಕಾಲ ಮಾಡಿರುವ ಕಾಮಗಾರಿಗಳು ಬಳಕೆ ಬರುವಂತೆ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈತ್ರಮ್ಮ ನಟರಾಜ್, ಮುಖಂಡರಾದ ಮೈಲಾರಪ್ಪ,ಅಪ್ಪಾಜಿಗೌಡ, ಅಣ್ಣಯ್ಯ ಶೆಟ್ಟಿ, ಸತೀಶ್ , ಕುಮಾರಸ್ವಾಮಿ, ಕಾಂತರಾಜು, ಶ್ರೀನಿವಾಸ್, ಆನಂದ್, ಗಣೇಶ್ ,ಚಂದ್ರೇಗೌಡ, ಗಿರೀಶ್, ದಿನೇಶ್, ನಾಗೇಂದ್ರ ಇದ್ದರು.

ಬೆಟ್ಟದಪುರ ಸಮೀಪದ ವಡ್ಡರೇ ಹೊಸಳ್ಳಿ ಗ್ರಾಮದಲ್ಲಿ ಶಾಸಕ ಕೆ. ಮಹದೇವ್ ಸೋಮವಾರ ಭೂಮಿಪೂಜೆ ನೆರವೇರಿಸಿದರು. ಮೈಲಾರಪ್ಪ ಅಪ್ಪಾಜಿಗೌಡ ಅಣ್ಣಯ್ಯ ಶೆಟ್ಟಿ ನಟರಾಜ್ ಮೈತ್ರಮ್ಮ ಇದ್ದರು

Leave a Comment

Your email address will not be published. Required fields are marked *

error: Content is protected !!
Scroll to Top