ತಾಲೂಕಿನ ಕಿರಗೂರು ಗ್ರಾಮದ ಅನೇಕ ವೀರಶೈವ ಮುಖಂಡರು ಸಭೆ

ಪಿರಿಯಾಪಟ್ಟಣ : ಜೆಡಿಎಸ್ ಶಾಸಕ ಕೆ ಮಹದೇವ್ ನೇತೃತ್ವದಲ್ಲಿ ತಾಲೂಕಿನ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು ಶಾಸಕರ ಸಾಧನೆಗಳನ್ನ ಕಣ್ಣಾರೆ ಕಂಡು ಕಾಂಗ್ರೆಸ್ ಪಕ್ಷವನ್ನು ತೊರೆದು ಶಾಸಕರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆಕೆ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದು ತಾಲೂಕಿನ ಕಿರಗೂರು ಗ್ರಾಮದ ಅನೇಕ ವೀರಶೈವ ಮುಖಂಡರು ಸಭೆಯಲ್ಲಿ ತಿಳಿಸಿದರು ,ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ ಮಾದೇವ್ ವಿವಿಧ ಪಕ್ಷದ ಕಾರ್ಯಕರ್ತರುಗಳು ನಾನು ಕೈಗೊಂಡಿರುವ ಅಭಿವೃದ್ಧಿಧಿ ಕಾರ್ಯಗಳನ್ನು ಕಾರ್ಯಗಳನ್ನು ಮೆಚ್ಚಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಮುಂದಿನ ಚುನಾವಣೆಯ ದಿಕ್ಕನೆೆೆ ಬದಲಿಸುವಂತೆ ಕಾಣುತ್ತಿದು, ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಕೆಲಸ ಮಾಡುವ ಮತ್ತು ತಾಲೂಕಿನ ಜನತೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಬಾರದಂತ ನನ್ನ ನಂಬಿರುವ ಕಾರ್ಯಕರ್ತರು ಮತ್ತು ಮುಖಂಡರನ್ನು ಕೈ ಬಿಡುವುದಿಲ್ಲ ಎಂದು ತಿಳಿಸಿದರು, ಶಾಸಕರಾದವರು ಯಾವುದೇ ಒಂದು ಜಾತಿ ಪರವಾಗಿ ನಿಲ್ಲಬಾರದು ಶಾಸಕರಾದವರು ಎಲ್ಲ ಸಮಾಜದವರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕು ಹಾಗೂ ಯಾವುದೇ ಸಂಘರ್ಷಕ್ಕೆಕೆ ಎಡೆ ಮಾಡಿಕೊಡಬಾರದು ಎಂದು ತಿಳಿಸಿದರು ಸುಮಾರು 70 ವರ್ಷಗಳಿಂದ ಗ್ರಾಮಗಳಿಗೆ ಸರಿಯಾದ ರಸ್ತೆ ಚರಂಡಿ ವ್ಯವಸ್ಥೆ ಮಾಡಿಕೊಡದೆ ಇಂದಿನ ಶಾಸಕರು ಕಾಲಹರಣ ಮಾಡಿದ್ದನ್ನು ನೋಡಿ ಬೇಸತ್ತು ನಾನು ಶಾಸಕನಾದ ಮೇಲೆ ಗ್ರಾಮೀಣ ಭಾಗಗಳಲ್ಲಿ ಮಾಡಿರವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹೆಚ್ಚು ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷದ ಕದತಟ್ಟುತ್ತಿದ್ದು ಪಕ್ಷ ಬಿಟ್ಟು ಬರುವವರಿಗೆ ಸ್ವಾಗತ ಕೋರುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷಷ ಅಣ್ಣಯ್ಯ ಶೆಟ್ಟಿ , ಕಾರ್ಯಧ್ಯಕ್ಷ ಆರ್ ಎಲ್ ಮಣಿ aವೀರಶೈವ ಮಹಾಸಭಾಧ್ಯಕ್ಷ ಚಂದ್ರಶೇಖರ್, ಪುರಸಭಾ ಅಧ್ಯಕ್ಷ ಮಹೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗೇಂದ್ರ , ಮೈಮುಲ್ ನಿರ್ದೇಶಕ ರಾಜೇಂದ್ರಪ್ಪ, ಮುಖಂಡರಾದ ರಂಗಸ್ವಾಮಿ, ರಘುನಾಥ್, , ಕೆಂಪಣ್ಣ,ಕೆ ಎಲ್ ಸುರೇಶ್, ಮಹದೇವ್ ಕಿರಗೂರು, ಜೆಸಿಪಿ ಮುತ್ತುರಾಜು, ಮತ್ತಿತರು ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top