ಶಾಂತವೀರಮ್ಮ ದೇವಸ್ಥಾನದ ಗರುಡಗಂಬ ಪ್ರತಿಷ್ಠಾಪನೆ. 15/10/2021

ಬೆಟ್ಟದಪುರದ ಗ್ರಾಮದೇವತೆ ಶಾಂತವೀರಮ್ಮ ನವರ ನೂತನ ದೇವಾಲಯದಲ್ಲಿ ಗರುಡಗಂಭ ಪ್ರತಿಷ್ಠಾಪನೆ ಮಾಡಲಾಯಿತು ಶಾಸಕ ಕೆ ಮಹದೇವ್ ಪೂಜೆ ಸಲ್ಲಿಸಿದರು.
ಶಾಂತವೀರಮ್ಮ ನವರ ದೇವಾಲಯ ಸುಮಾರು 1 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಹಲವಾರು ದಾನಿಗಳು ದೇವಾಲಯಕ್ಕೆ ಧನಸಹಾಯ ನೀಡಿದ್ದು ಗ್ರಾಮದ ಹಿರಿಯರಾದ ತಮ್ಮಯ್ಯ ಶೆಟ್ಟರ್ ಅವರು ಸುಮಾರು 20 ಲಕ್ಷ ಅನುದಾನವನ್ನು ನೀಡಿದ್ದು ಅಲ್ಲದೆ ಶಾಸಕ ಕೆ ಮಹದೇವ್ ರವರು 2 ಲಕ್ಷ ರೂ ಗಳನ್ನು ಗರುಡಗಂಬಕ್ಕೆ ನೀಡಿದ್ದು ಅವರ ಅಮೃತ ಹಸ್ತದಿಂದ ಶುಕ್ರವಾರ ಶಾಂತವೀರಮ್ಮ ದೇವಾಲಯದ ಮುಂದೆ ಶಾಸಕರ ಧರ್ಮಪತ್ನಿ ಸುಭದ್ರಮ್ಮ ಕೆ ಮಹದೇವ್ ಅವರು ಶುಭಲಗ್ನದಲ್ಲಿ ಪೂಜೆ ಸಲ್ಲಿಸಿ ಗರುಡಗಂಬವನ್ನು ಪ್ರತಿಷ್ಠಾಪಿಸಲಾಯಿತು ವಿವಿಧ ಪೂಜೆಗಳನ್ನು ಗ್ರಾಮದ ಪುರೋಹಿತರಾದ ಪ್ರಭಾ ಶಂಕರ್ ಅವರ ತಂಡದಿಂದ ನೆರವೇರಿತು.

ಶಾಸಕ ಕೆ ಮಹದೇವ್ ಮಾತನಾಡಿ ನಮ್ಮ ದೇಶದಲ್ಲಿ ಮನುಷ್ಯರಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುವಂತಹ ಸ್ಥಳಗಳು ದೇವಾಲಯಗಳು ಆದ್ದರಿಂದ ಪ್ರತಿಗ್ರಾಮದಲ್ಲಿ ಉನ್ನತಮಟ್ಟದ ಮತ್ತು ಸುಂದರವಾದ ದೇವಾಲಯ ನಿರ್ಮಿಸುವುದರಿಂದ ಗ್ರಾಮದ ಸೌಂದರ್ಯ ಹಾಗೂ ಜನತೆಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ಪ್ರಮುಖ ಸ್ಥಳವಾಗಿರುತ್ತದೆ ಆದ್ದರಿಂದ ಜನರು ತಮ್ಮ ಗ್ರಾಮಗಳಲ್ಲಿ ಸುಂದರವಾದ ದೇವಾಲಯಗಳನ್ನು ನಿರ್ಮಿಸಿ ಕೊಡಬೇಕೆಂದು ಸಲಹೆ ನೀಡಿದರು ಇನ್ನು ಕೆಲವೇ ದಿನಗಳಲ್ಲಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ತಾಲೂಕು ಪಂಚಾಯಿತಿ ಸದಸ್ಯರಾದ, ಕುಂಜಪ್ಪ ಕಾರ್ನಾಡ್, ಗ್ರಾಮದ ಮುಖಂಡರಾದ ಬಿಕೆ ಸುರೇಶ್, ಬಿಜೆ ದೇವರಾಜು, ಲೋಕೇಶ್, ಕೆ ಎಸ್ ಕೆ ಮೋಟರ್ ಮಾಲೀಕ ಗಗನ್ ಹಾಗೂ ಮತ್ತಿತರರು ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top